MainMenu
 
 
 

78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಗಂಗಾವತಿ

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಡಿ. 9 ರಿಂದ 11 ರವರೆಗೂ ನಡೆಯಲಿರುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಚುಟುಕು ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಅವರನ್ನು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಮತ್ತೆ ಕನ್ನಡದ ಕಂಪು ಹೆಚ್ಚೆಚ್ಚು ಪಸರಿಸಲು ಕನ್ನಡಿಗರು ಪ್ರೋತ್ಸಾಹ ನೀಡಬೇಕೆಂದು ಕೋರಿದ್ದಾರೆ.


ಸಾಹಿತ್ಯ ಪ್ರೇಮಿಗಳಿಗಾಗಿ ಸಮ್ಮೇಳನದ ಸುದ್ದಿಗಳ ಸಮಗ್ರ ಸಂಗ್ರಹವನ್ನು ಇಲ್ಲಿ ನೀಡಲಾಗುತ್ತಿದೆ. ನಿಮ್ಮೂರಿನ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯನ್ನು ಸಹಾ ನಮಗೆ ಸ್ಕ್ಯಾನ್ ಮಾಡಿ ಅಥವಾ kavivichara@gmail.comಗೆ ಲಿಂಕ್ ಕಳಿಸುವ ಮೂಲಕ ತಲುಪಿಸಬಹುದು.

ಸಮಗ್ರ ವರದಿ ವಿವಿಧ ಮೂಲಗಳಿಂದ

* ಒನ್ ಇಂಡಿಯಾ ಕನ್ನಡ (ದಟ್ಸ್ ಕನ್ನಡ.ಕಾಂ)ದಲ್ಲಿ ಸಮ್ಮೇಳನದ ಸುದ್ದಿಗಳು
* ವಿಕಿಪೀಡಿಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ
* ಕನ್ನಡ ಸಾಹಿತ್ಯ ಪರಿಷತ್ತು ವೆಬ್ ತಾಣ
* ಸಮ್ಮೇಳನ ಅಧ್ಯಕ್ಷರಾಗಿ ಸಿಪಿಕೆ-ಪ್ರಜಾವಾಣಿ ವಾರ್ತೆ


###***###

ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ
ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ
ಮನುಜರಿಗೆ ಸೊಗಮೀವ ಕರ್ತವ್ಯವೊಂದೆ
ನಿನ್ನದೆಂದರಿಯದಿರು ; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವುವು
-ಕುವೆಂಪು

ಅರಿಕೆ
ಕನ್ನಡನಾಡು ನುಡಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ಸ್ಮರಿಸುತ್ತಾ ಕನ್ನಡ ಭಾಷೆ ಹಾಗು ಸಂಸ್ಕೃತಿಯ ಬಗ್ಗೆ ಎಲ್ಲರಲ್ಲಿ ಅಭಿಮಾನ ಉಂಟಾಗಲಿ ಎಂಬ ಉದ್ದೇಶದಿಂದ ನಮ್ಮ ತಂಡ "ಕನ್ನಡ ಕವಿ ಬಳಗ" ಕನ್ನಡ ಸಾಹಿತ್ಯದ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಸಲುವಾಗಿ "ಕನ್ನಡ ಕವಿ" (www.kannadakavi.com)ಎಂಬ ಅಂತರ್ಜಾಲ ತಾಣವೊಂದನ್ನು ನಿರ್ಮಿಸಿ ಈಗಾಗಲೇ 4 ವರ್ಷಗಳು ಕಳೆದಿದೆ. ಈಗ ಹೊಸ ವಿನ್ಯಾಸದಲ್ಲಿ ಯುನಿಕೋಡ್ ಆವೃತ್ತಿಯಲ್ಲಿ ಓದುಗರ ಸಮಕ್ಷಮಕ್ಕೆ ಇಡಲಾಗುತ್ತಿದೆ.
 
ಸಾಹಿತಿಗಳ ತಾಣದ ಬಗ್ಗೆ ಒಂದಿಷ್ಟು ಮಾತು:
ಕನ್ನಡ ಸಾಹಿತ್ಯವನ್ನು ಇಪ್ಪತ್ತಕ್ಕೂ ಹೆಚ್ಚು ವಿಭಾಗಗಳನ್ನಾಗಿ ಮಾಡಿ ಸಾಹಿತ್ಯದ ವೈವಿಧ್ಯತೆಯನ್ನು ಪರಿಚಯಿಸುವುದರ ಜೊತೆಗೆ ಜಾನಪದ, ಕನ್ನಡದಲ್ಲಿ ಶುಭಾಶಯಪತ್ರ, ಹಳೆ ನೆನಪುಗಳನ್ನು ಸವಿಯುವಂತೆ ಮಾಡುವ ಸಿಹಿ-ಕಹಿ ನೆನಪು, ಗಣ್ಯರ ವಿಳಾಸಗಳು, ಯುವ ಸಾಹಿತಿಗಳಿಗಾಗಿ ಅಂಕಣಗಳು, ಹಿರಿಯರ ಬೋಧನೆಗಳು,ಚರ್ಚೆ ಇತ್ಯಾದಿಗಳನ್ನು ನಮ್ಮ ಅಂತರ್ಜಾಲ ತಾಣವು ಒಳಗೊಂಡಿರುತ್ತದೆ. ಈ ನಿಟ್ಟಿನಲ್ಲಿ ಯುವ ಬರಹಗಾರಿಗೆ ಇಲ್ಲಿದೆ ಸದಾವಕಾಶ. ಕನ್ನಡ ನಾಡು, ನುಡಿಯ ಬಗ್ಗೆ, ನಿಮ್ಮ ಊರು, ಜನ-ಜಾತ್ರೆ, ವಿಜ್ಞಾನ ಮತ್ತು ಪರಿಸರದ ಬಗ್ಗೆ ನಮಗೆ ಲೇಖನಗಳನ್ನು ಬರೆದು ಕಳುಹಿಸಿ. ಹಾಗೆಯೇ ಯುವ ಚಿತ್ರಕಾರರು, ಛಾಯಾಚಿತ್ರಕಾರರು ತಾವು ತೆಗೆದ ಚಿತ್ರಗಳನ್ನು ನಮಗೆ ಒದಗಿಸಿದರೆ ಅದಕ್ಕೆ ಅಗತ್ಯ ಮೆರಗನ್ನು ನೀಡಿ ಶುಭಾಶಯ ಪತ್ರದ ರೀತಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಬೇಕೆಂದಿದ್ದೇವೆ.
 
ಹಿರಿಯ ಸಾಹಿತಿಗಳ ಜೊತೆಗಿನ ಸಂದರ್ಶನ, ಸಂವಾದವಿರುತ್ತದೆ, ಸಾಹಿತ್ಯದ ಬಗೆಗಿನ ಪ್ರಶ್ನೆಗಳಿಗೆ ತಜ್ಞರಿಂದ ಸೂಕ್ತ ಉತ್ತರ ದೊರೆಯುವಂತೆ ಮಾಡುವ ಉದ್ದೇಶವೂ ಇದೆ
 
ಈ ಎಲ್ಲದರ ಉದ್ದೇಶ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ತನ್ಮೂಲಕ ಕನ್ನಡದ ಹಿರಿಯರನ್ನು ನೆನೆದು ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಹೆಚ್ಚಿಸುವುದು.
 
ಈ ನಮ್ಮ ಸಾಹಿತ್ಯ ಆಂದೋಲನಕ್ಕೆ ನಮ್ಮೊಡನೆ ಕೈಜೋಡಿಸಲು, ಸಲಹೆ ಸೂಚನೆಗಳನ್ನು ನೀಡಲು ಇಚ್ಚಿಸುವವರನ್ನು ಕನ್ನಡ ಕವಿ ಬಳಗ ಆತ್ಮೀಯವಾಗಿ ಸ್ವಾಗತಿಸುತ್ತದೆ.
 
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕನ್ನಡ ಕವಿ ಬಳಗ: 9901000833.
E mail : kavivichara@gmail.com
 
 
ವಂದನೆಗಳೊಂದಿಗೆ
ಕನ್ನಡ ಕವಿ ಬಳಗ