|
ದುರ್ಗದಲ್ಲಿ ಸಾಹಿತ್ಯ ಸಂಭ್ರಮ
ಚಿತ್ತಾರದ ಕಲ್ಲುಗಳುಳ್ಳ ನಾಡು ವೀರ ಮದಕರಿನಾಯಕನ ಬೀಡು ಚಿತ್ರದುರ್ಗದಲ್ಲಿ 75 ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ .4 ರಿಂದ ಫೆ 7 ರವರೆಗೂ ಜರುಗಲಿದೆ. ಒನಕೆ ಒಬವ್ವ ಕ್ರೀಡಾಂಗಣದಲ್ಲಿ ನಡೆವ ಸಾಹಿತ್ಯ ಜಾತ್ರೆಗೆ ಲಕ್ಷಾಂತರ ಮಂದಿ ಸಾಕ್ಷಿಯಾಗಲಿದ್ದಾರೆ. ಕನ್ನಡದ ಮೊದಲ ಪ್ರಾಧ್ಯಾಪಕ ಟಿಎಸ್ ವೆಂಕಣ್ಣಯ್ಯ, ಕಾದಂಬರಿಕಾರ ತರಾ ಸುಬ್ಬರಾಯ ಸೇರಿದಂತೆ ಅನೇಕ ಗಣ್ಯರ ಹೆಸರಿನಲ್ಲಿ ವೇದಿಕೆ ನಿರ್ಮಾಣವಾಗಿದೆ. ಭಕ್ಷ್ಯ ಭೋಜ್ಯಗಳು ಅತಿಥಿಗಳಿಗೆ ಕಾದಿದೆ. ಜಿಲ್ಲೆಯ ಜೈನ ಸಮಾಜ ಸಮ್ಮೇಳನಕ್ಕೆ ಬರುವ ಜನರಿಗೆ ಉಚಿತವಾಗಿ ಮಜ್ಜಿಗೆ, ನೀರು ನೀಡಲಿದ್ದಾರೆ.ಸವಿತಾ ಸಮಾಜದವರು ಉಚಿತವಾಗಿ ಕ್ಷೌರ ಮಾಡಲಿದ್ದಾರೆ. ಭೋಜನ ಹಾಗೂ ವಸತಿ ವ್ಯವಸ್ಥೆಯನ್ನು ಶ್ರೀಮುರುಘಾ ಮಠವಹಿಸಿಕೊಂಡಿದೆ.
ಚಿತ್ರದುರ್ಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಮೃತಮಹೋತ್ಸವ ಜರಗುತ್ತಿದೆ. ಈ ಬಾರಿಯ ಸಮ್ಮೇಳನಾಧ್ಯಕ್ಷರಾದ ಸಂಶೋಧಕ,ವಿದ್ವಾಂಸ ಡಾ. ಎಲ್ ಬಸವರಾಜು ಅವರ ಕಿರು ಪರಿಚಯಕ್ಕೆ ಇಲ್ಲಿ ಕ್ಲಿಕ್ ಮಾಡಿ.
ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ
ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ
ಮನುಜರಿಗೆ ಸೊಗಮೀವ ಕರ್ತವ್ಯವೊಂದೆ
ನಿನ್ನದೆಂದರಿಯದಿರು ; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವುವು
-ಕುವೆಂಪು
|