MainMenu
 
 
 
 

ದುರ್ಗದಲ್ಲಿ ಸಾಹಿತ್ಯ ಸಂಭ್ರಮ

ಚಿತ್ತಾರದ ಕಲ್ಲುಗಳುಳ್ಳ ನಾಡು ವೀರ ಮದಕರಿನಾಯಕನ ಬೀಡು ಚಿತ್ರದುರ್ಗದಲ್ಲಿ 75 ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ .4 ರಿಂದ ಫೆ 7 ರವರೆಗೂ ಜರುಗಲಿದೆ. ಒನಕೆ ಒಬವ್ವ ಕ್ರೀಡಾಂಗಣದಲ್ಲಿ ನಡೆವ ಸಾಹಿತ್ಯ ಜಾತ್ರೆಗೆ ಲಕ್ಷಾಂತರ ಮಂದಿ ಸಾಕ್ಷಿಯಾಗಲಿದ್ದಾರೆ. ಕನ್ನಡದ ಮೊದಲ ಪ್ರಾಧ್ಯಾಪಕ ಟಿಎಸ್ ವೆಂಕಣ್ಣಯ್ಯ, ಕಾದಂಬರಿಕಾರ ತರಾ ಸುಬ್ಬರಾಯ ಸೇರಿದಂತೆ ಅನೇಕ ಗಣ್ಯರ ಹೆಸರಿನಲ್ಲಿ ವೇದಿಕೆ ನಿರ್ಮಾಣವಾಗಿದೆ. ಭಕ್ಷ್ಯ ಭೋಜ್ಯಗಳು ಅತಿಥಿಗಳಿಗೆ ಕಾದಿದೆ. ಜಿಲ್ಲೆಯ ಜೈನ ಸಮಾಜ ಸಮ್ಮೇಳನಕ್ಕೆ ಬರುವ ಜನರಿಗೆ ಉಚಿತವಾಗಿ ಮಜ್ಜಿಗೆ, ನೀರು ನೀಡಲಿದ್ದಾರೆ.ಸವಿತಾ ಸಮಾಜದವರು ಉಚಿತವಾಗಿ ಕ್ಷೌರ ಮಾಡಲಿದ್ದಾರೆ. ಭೋಜನ ಹಾಗೂ ವಸತಿ ವ್ಯವಸ್ಥೆಯನ್ನು ಶ್ರೀಮುರುಘಾ ಮಠವಹಿಸಿಕೊಂಡಿದೆ.

ಚಿತ್ರದುರ್ಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಮೃತಮಹೋತ್ಸವ ಜರಗುತ್ತಿದೆ. ಈ ಬಾರಿಯ ಸಮ್ಮೇಳನಾಧ್ಯಕ್ಷರಾದ ಸಂಶೋಧಕ,ವಿದ್ವಾಂಸ ಡಾ. ಎಲ್ ಬಸವರಾಜು ಅವರ ಕಿರು ಪರಿಚಯಕ್ಕೆ ಇಲ್ಲಿ ಕ್ಲಿಕ್ ಮಾಡಿ.

ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ
ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ
ಮನುಜರಿಗೆ ಸೊಗಮೀವ ಕರ್ತವ್ಯವೊಂದೆ
ನಿನ್ನದೆಂದರಿಯದಿರು ; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವುವು
-ಕುವೆಂಪು

ಅರಿಕೆ
ಕನ್ನಡನಾಡು ನುಡಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ಸ್ಮರಿಸುತ್ತಾ ಕನ್ನಡ ಭಾಷೆ ಹಾಗು ಸಂಸ್ಕೃತಿಯ ಬಗ್ಗೆ ಎಲ್ಲರಲ್ಲಿ ಅಭಿಮಾನ ಉಂಟಾಗಲಿ ಎಂಬ ಉದ್ದೇಶದಿಂದ ನಮ್ಮ ತಂಡ "ಕನ್ನಡ ಕವಿ ಬಳಗ" ಕನ್ನಡ ಸಾಹಿತ್ಯದ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಸಲುವಾಗಿ "ಕನ್ನಡ ಕವಿ" (www.kannadakavi.com)ಎಂಬ ಅಂತರ್ಜಾಲ ತಾಣವೊಂದನ್ನು ನಿರ್ಮಿಸಿ ಈಗಾಗಲೇ ವರ್ಷ ಕಳೆದಿದೆ. ಈಗ ಹೊಸ ವಿನ್ಯಾಸದಲ್ಲಿ ಯುನಿಕೋಡ್ ಆವೃತ್ತಿಯಲ್ಲಿ ಓದುಗರ ಸಮಕ್ಷಮಕ್ಕೆ ಇಡಲಾಗುತ್ತಿದೆ. ಬಾನುಲಿ ಡಿಸೈನ್ ಸ್ಟುಡಿಯೋಸ್(ಈ ಮುಂಚೆ ಐಡಿ ಟಕ್ನಾಲಜಿ)ಸಂಸ್ಥೆಯ ಶ್ರೀ ಪ್ರಶಾಂತ್ ಕಲ್ಲೂರ್ ಹಾಗೂ ತಂಡದವರು ಈ ಹೊಸ ವಿನ್ಯಾಸದ ರುವಾರಿಗಳಾಗಿದ್ದಾರೆ.
 
ಸಾಹಿತಿಗಳ ತಾಣದ ಬಗ್ಗೆ ಒಂದಿಷ್ಟು ಮಾತು:
ಕನ್ನಡ ಸಾಹಿತ್ಯವನ್ನು ಇಪ್ಪತ್ತಕ್ಕೂ ಹೆಚ್ಚು ವಿಭಾಗಗಳನ್ನಾಗಿ ಮಾಡಿ ಸಾಹಿತ್ಯದ ವೈವಿಧ್ಯತೆಯನ್ನು ಪರಿಚಯಿಸುವುದರ ಜೊತೆಗೆ ಜಾನಪದ, ಕನ್ನಡದಲ್ಲಿ ಶುಭಾಶಯಪತ್ರ, ಹಳೆ ನೆನಪುಗಳನ್ನು ಸವಿಯುವಂತೆ ಮಾಡುವ ಸಿಹಿ-ಕಹಿ ನೆನಪು, ಗಣ್ಯರ ವಿಳಾಸಗಳು, ಯುವ ಸಾಹಿತಿಗಳಿಗಾಗಿ ಅಂಕಣಗಳು, ಹಿರಿಯರ ಬೋಧನೆಗಳು,ಚರ್ಚೆ ಇತ್ಯಾದಿಗಳನ್ನು ನಮ್ಮ ಅಂತರ್ಜಾಲ ತಾಣವು ಒಳಗೊಂಡಿರುತ್ತದೆ. ಈ ನಿಟ್ಟಿನಲ್ಲಿ ಯುವ ಬರಹಗಾರಿಗೆ ಇಲ್ಲಿದೆ ಸದಾವಕಾಶ. ಕನ್ನಡ ನಾಡು, ನುಡಿಯ ಬಗ್ಗೆ, ನಿಮ್ಮ ಊರು, ಜನ-ಜಾತ್ರೆ, ವಿಜ್ಞಾನ ಮತ್ತು ಪರಿಸರದ ಬಗ್ಗೆ ನಮಗೆ ಲೇಖನಗಳನ್ನು ಬರೆದು ಕಳುಹಿಸಿ. ಹಾಗೆಯೇ ಯುವ ಚಿತ್ರಕಾರರು, ಛಾಯಾಚಿತ್ರಕಾರರು ತಾವು ತೆಗೆದ ಚಿತ್ರಗಳನ್ನು ನಮಗೆ ಒದಗಿಸಿದರೆ ಅದಕ್ಕೆ ಅಗತ್ಯ ಮೆರಗನ್ನು ನೀಡಿ ಶುಭಾಶಯ ಪತ್ರದ ರೀತಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಬೇಕೆಂದಿದ್ದೇವೆ.
 
ತಿಂಗಳಿಗೊಮ್ಮೆ ಹಿರಿಯ ಸಾಹಿತಿಗಳ ಜೊತೆಗಿನ ಸಂದರ್ಶನ, ಸಂವಾದವಿರುತ್ತದೆ, ಸಾಹಿತ್ಯದ ಬಗೆಗಿನ ಪ್ರಶ್ನೆಗಳಿಗೆ ತಜ್ಞರಿಂದ ಸೂಕ್ತ ಉತ್ತರ ದೊರೆಯುವಂತೆ ಮಾಡುವ ಉದ್ದೇಶವೂ ಇದೆ
 
ಈ ಎಲ್ಲದರ ಉದ್ದೇಶ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ತನ್ಮೂಲಕ ಕನ್ನಡದ ಹಿರಿಯರನ್ನು ನೆನೆದು ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಹೆಚ್ಚಿಸುವುದು.
 
ಈ ನಮ್ಮ ಸಾಹಿತ್ಯ ಆಂದೋಲನಕ್ಕೆ ನಮ್ಮೊಡನೆ ಕೈಜೋಡಿಸಲು, ಸಲಹೆ ಸೂಚನೆಗಳನ್ನು ನೀಡಲು ಇಚ್ಚಿಸುವವರನ್ನು ಕನ್ನಡ ಕವಿ ಬಳಗ ಆತ್ಮೀಯವಾಗಿ ಸ್ವಾಗತಿಸುತ್ತದೆ.
 
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕನ್ನಡ ಕವಿ ಬಳಗ: 9901000833.
E mail : kavivichara@gmail.com
 
 
ವಂದನೆಗಳೊಂದಿಗೆ
ಕನ್ನಡ ಕವಿ ಬಳಗ