MainMenu
 
 
 
 

76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಗದಗ

ಗದಗಿನ ವೀರನಾರಾಯಣನ ಗೂಡು ಹಾಗೂ ಕುಮಾರವ್ಯಾಸನ ಕರ್ಮಭೂಮಿಯಲ್ಲಿ ಆಯೋಜಿಸಲಾಗಿರುವ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಕವಿ ಬಳಗದ ಶುಭ ಹಾರೈಕೆಗಳು. ಜನಸಮಾನ್ಯರ ನೋವು ನಲಿವುಗಳನ್ನು ಹತ್ತಿರದಿಂದ ಬಲ್ಲ ಈ ಬಾರಿ ಸಮ್ಮೇಳನ ಅಧ್ಯಕ್ಷೆಖ್ಯಾತ ಕಾದಂಬರಿಗಾರ್ತಿ ಗೀತಾ ನಾಗಭೂಷಣ ಅವರ ನೇತೃತ್ವದಲ್ಲಿ ಅಕ್ಷರ ಜಾತ್ರೆ ಸಂಭ್ರಮ. ಫೆಬ್ರವರಿ 19, 20 ಹಾಗೂ 21 ಮೂರು ದಿನಗಳ ಕಾಲ ಗದಗ ನಗರದಲ್ಲಿ ಸಾಹಿತ್ಯ ಜಾತ್ರೆ ನಡೆಯಲಿದೆ. ನೆರೆಪೀಡಿತ ಪ್ರದೇಶದಲ್ಲಿ ಜನ ತಮ್ಮ ನೋವನ್ನು ಮರೆತು ಸಾಹಿತ್ಯ ಪ್ರೇಮಿಗಳ ಸತ್ಕಾರಕ್ಕೆ ಕಾದಿದ್ದಾರೆ. ದೂರ ಊರಿಂದ ಸಮ್ಮೇಳನಕ್ಕೆ ಬರುವ ಸಾಹಿತ್ಯ ಪ್ರೇಮಿಗಳೇ, ದಯವಿಟ್ಟು ಜಲಪ್ರಳಯದಿಂದ ತತ್ತರಿಸಿರುವ ಈ ಭಾಗದ ಜನರಿಗೆ ನೆರವಾಗಿ, ಅವರಿಗೆ ಒಂದಿಷ್ಟು ಸಾಂತ್ವನ ಹೇಳಿಬನ್ನಿ...

ಗೀತಾ ನಾಗಭೂಷಣ ಗದಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಕಿರು ಪರಿಚಯಇಲ್ಲಿ ಕ್ಲಿಕ್ ಮಾಡಿ

ಸಮಗ್ರ ವರದಿ ವಿವಿಧ ಮೂಲಗಳಿಂದ

*ಕನ್ನಡ ಸಂಸ್ಕೃತಿ ಕಲೆ ಅನಾವರಣಕ್ಕೆ ಗದಗ ಸಜ್ಜು
*ಸಾಹಿತ್ಯ ಸಮ್ಮೇಳನ ವಿವರಗಳಿಗೆ ಕಸಾಪ ವೆಬ್ ಸೈಟ್
*ಸಾಹಿತ್ಯ ಸಮ್ಮೇಳನಕ್ಕೆ ಹಣದ ಕೊರತೆ ಇಲ್ಲ
*ಈ ಬಾರಿ ಸಮ್ಮೇಳನದ ಊಟದ ಮೆನು
*ಸಾಹಿತ್ಯ ಪ್ರೇಮಿಗಳ ಸ್ವಾಗತಕ್ಕೆ ಮಹಾದ್ವಾರ

ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ
ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ
ಮನುಜರಿಗೆ ಸೊಗಮೀವ ಕರ್ತವ್ಯವೊಂದೆ
ನಿನ್ನದೆಂದರಿಯದಿರು ; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವುವು
-ಕುವೆಂಪು

ಅರಿಕೆ
ಕನ್ನಡನಾಡು ನುಡಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ಸ್ಮರಿಸುತ್ತಾ ಕನ್ನಡ ಭಾಷೆ ಹಾಗು ಸಂಸ್ಕೃತಿಯ ಬಗ್ಗೆ ಎಲ್ಲರಲ್ಲಿ ಅಭಿಮಾನ ಉಂಟಾಗಲಿ ಎಂಬ ಉದ್ದೇಶದಿಂದ ನಮ್ಮ ತಂಡ "ಕನ್ನಡ ಕವಿ ಬಳಗ" ಕನ್ನಡ ಸಾಹಿತ್ಯದ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಸಲುವಾಗಿ "ಕನ್ನಡ ಕವಿ" (www.kannadakavi.com)ಎಂಬ ಅಂತರ್ಜಾಲ ತಾಣವೊಂದನ್ನು ನಿರ್ಮಿಸಿ ಈಗಾಗಲೇ ವರ್ಷ ಕಳೆದಿದೆ. ಈಗ ಹೊಸ ವಿನ್ಯಾಸದಲ್ಲಿ ಯುನಿಕೋಡ್ ಆವೃತ್ತಿಯಲ್ಲಿ ಓದುಗರ ಸಮಕ್ಷಮಕ್ಕೆ ಇಡಲಾಗುತ್ತಿದೆ. ಬಾನುಲಿ ಡಿಸೈನ್ ಸ್ಟುಡಿಯೋಸ್(ಈ ಮುಂಚೆ ಐಡಿ ಟಕ್ನಾಲಜಿ)ಸಂಸ್ಥೆಯ ಶ್ರೀ ಪ್ರಶಾಂತ್ ಕಲ್ಲೂರ್ ಹಾಗೂ ತಂಡದವರು ಈ ಹೊಸ ವಿನ್ಯಾಸದ ರುವಾರಿಗಳಾಗಿದ್ದಾರೆ.
 
ಸಾಹಿತಿಗಳ ತಾಣದ ಬಗ್ಗೆ ಒಂದಿಷ್ಟು ಮಾತು:
ಕನ್ನಡ ಸಾಹಿತ್ಯವನ್ನು ಇಪ್ಪತ್ತಕ್ಕೂ ಹೆಚ್ಚು ವಿಭಾಗಗಳನ್ನಾಗಿ ಮಾಡಿ ಸಾಹಿತ್ಯದ ವೈವಿಧ್ಯತೆಯನ್ನು ಪರಿಚಯಿಸುವುದರ ಜೊತೆಗೆ ಜಾನಪದ, ಕನ್ನಡದಲ್ಲಿ ಶುಭಾಶಯಪತ್ರ, ಹಳೆ ನೆನಪುಗಳನ್ನು ಸವಿಯುವಂತೆ ಮಾಡುವ ಸಿಹಿ-ಕಹಿ ನೆನಪು, ಗಣ್ಯರ ವಿಳಾಸಗಳು, ಯುವ ಸಾಹಿತಿಗಳಿಗಾಗಿ ಅಂಕಣಗಳು, ಹಿರಿಯರ ಬೋಧನೆಗಳು,ಚರ್ಚೆ ಇತ್ಯಾದಿಗಳನ್ನು ನಮ್ಮ ಅಂತರ್ಜಾಲ ತಾಣವು ಒಳಗೊಂಡಿರುತ್ತದೆ. ಈ ನಿಟ್ಟಿನಲ್ಲಿ ಯುವ ಬರಹಗಾರಿಗೆ ಇಲ್ಲಿದೆ ಸದಾವಕಾಶ. ಕನ್ನಡ ನಾಡು, ನುಡಿಯ ಬಗ್ಗೆ, ನಿಮ್ಮ ಊರು, ಜನ-ಜಾತ್ರೆ, ವಿಜ್ಞಾನ ಮತ್ತು ಪರಿಸರದ ಬಗ್ಗೆ ನಮಗೆ ಲೇಖನಗಳನ್ನು ಬರೆದು ಕಳುಹಿಸಿ. ಹಾಗೆಯೇ ಯುವ ಚಿತ್ರಕಾರರು, ಛಾಯಾಚಿತ್ರಕಾರರು ತಾವು ತೆಗೆದ ಚಿತ್ರಗಳನ್ನು ನಮಗೆ ಒದಗಿಸಿದರೆ ಅದಕ್ಕೆ ಅಗತ್ಯ ಮೆರಗನ್ನು ನೀಡಿ ಶುಭಾಶಯ ಪತ್ರದ ರೀತಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಬೇಕೆಂದಿದ್ದೇವೆ.
 
ತಿಂಗಳಿಗೊಮ್ಮೆ ಹಿರಿಯ ಸಾಹಿತಿಗಳ ಜೊತೆಗಿನ ಸಂದರ್ಶನ, ಸಂವಾದವಿರುತ್ತದೆ, ಸಾಹಿತ್ಯದ ಬಗೆಗಿನ ಪ್ರಶ್ನೆಗಳಿಗೆ ತಜ್ಞರಿಂದ ಸೂಕ್ತ ಉತ್ತರ ದೊರೆಯುವಂತೆ ಮಾಡುವ ಉದ್ದೇಶವೂ ಇದೆ
 
ಈ ಎಲ್ಲದರ ಉದ್ದೇಶ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ತನ್ಮೂಲಕ ಕನ್ನಡದ ಹಿರಿಯರನ್ನು ನೆನೆದು ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಹೆಚ್ಚಿಸುವುದು.
 
ಈ ನಮ್ಮ ಸಾಹಿತ್ಯ ಆಂದೋಲನಕ್ಕೆ ನಮ್ಮೊಡನೆ ಕೈಜೋಡಿಸಲು, ಸಲಹೆ ಸೂಚನೆಗಳನ್ನು ನೀಡಲು ಇಚ್ಚಿಸುವವರನ್ನು ಕನ್ನಡ ಕವಿ ಬಳಗ ಆತ್ಮೀಯವಾಗಿ ಸ್ವಾಗತಿಸುತ್ತದೆ.
 
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕನ್ನಡ ಕವಿ ಬಳಗ: 9901000833.
E mail : kavivichara@gmail.com
 
 
ವಂದನೆಗಳೊಂದಿಗೆ
ಕನ್ನಡ ಕವಿ ಬಳಗ