| ಚಾವುಂಡರಾಯ | |
| ಸ್ವ-ವಿವರ | |
| ಚಾವುಂಡರಾಯನು ಗಂಗವಾಡಿಯರಾಜನಾಗಿದ್ದ 'ನೊಳಂಬ ಕುಲಾಂತಕ' ನೆನಸಿಕೊಂಡ ಮಾರಸಿಂಹನ ಸೇನಾಧಿಪತಿಯಾಗಿದ್ದನು. | |
| ಕ್ರಿ.ಶ. ೯೭೪ ರಲ್ಲಿ 'ಜಗದೇಕವೀರ' ನೆಂದು ಪ್ರಸಿದ್ಧನಾದ ನಾಲ್ವಡಿ ರಾಚಮಲ್ಲ ಸತ್ಯವಾಕ್ಯನಲ್ಲಿಯೂ, ಕ್ರಿ.ಶ. ೯೭೭ ರಿಂದ ಕ್ರಿ.ಶ. ೯೮೪ ರವರೆಗೆ ರಕ್ಕಸಸಂಗ ರಾಚಮಲ್ಲನಲ್ಲಿಯೂ ಚಾವುಂಡರಾಯನು ಸೇನಾಪತಿಯೂ, ಮಂತ್ರಿಯೂ ಆಗಿದ್ದನು. | |
| ರಾಚಮಲ್ಲ ಸತ್ಯವಾಕ್ಯನೇ ಇವನಿಗೆ 'ರಾಯ' ಎಂಬ ಬಿರುದುಕೊಟ್ಟ ದೊರೆ. ರಾಯನಿಗೆ ದೊರೆತ ಇತರ ಬಿರುದುಗಳು ವೀರ ಮಾರ್ತಾಂಡ, ಸಮರ ಪರಶುರಾಮ, ಪ್ರತಿಪಕ್ಷರಾಕ್ಷಸ. | |
| ರಾಯನು ಜೈನ ಮತಾವಲಂಬಿ. ಶ್ರವಣಬೆಳಗೊಳದ ಮೇಲೆ ಗೋಮಟೇಶ್ವರನನ್ನು ಪ್ರತಿಷ್ಠಾಪಿಸಿದ್ದು ಇವನ ಸಾಧನೆ. | |
| ಸಾಹಿತ್ಯ ಸೇವೆಯ ಜೊತೆಗೆ ಕವಿಗಳಿಗೆ ಆಶ್ರಯದಾತನಾಗಿದ್ದನು. | |
| ಇವನ ಬರೆದ ಕೃತಿಯು 'ಚಾವುಂಡರಾಯಪುರಾಣ' ವೆಂದು ಪ್ರಸಿದ್ಧವಾಗಿದೆ ಕನ್ನಡದ ಪ್ರಾಚೀನ ಗದ್ಯಗ್ರಂಥಗಳಲ್ಲಿ ಇದು ಕೂಡ ಒಂದು. | |