| ರಾಜಾದಿತ್ಯ | |
| ಸ್ವ-ವಿವರ | |
| ರಾಜಾದಿತ್ಯನು ತನಕ್ಕಿಂತ ಮುಂಚಿನ ಯಾವ ಕನ್ನಡ ಕವಿಯ ಹೆಸರನ್ನೂ ಹೇಳಿಲ್ಲವಾದ್ದರಿಂದ ಇವನ ಕಾಲವಿಚಾರದಲ್ಲಿ ಸ್ವಲ್ಪ ತೊಡಕು ಬಂದಿತ್ತು. | |
| ಭಿಲ್ಲಮನು ಪರಾಜಯಗಳ ಸುದ್ದಿ ಹೇಳುವ ಪದ್ಯಗಳು ಗೋಚರಿಸಿದ್ದರಿಂದ ಆ ತೊಡಕು ನಿವಾರಣೆಯಾಯಿತು. | |
| ಈ ಜೈನಕವಿ ಹೂವಿನ ಬಾಗೆಯೆಂಬ ಗ್ರಾಮದವನು. ಆ ಗ್ರಾಮ ಕೂಡಿಮಂಡಲಕ್ಕೆ ಅನುಪಮವಾದ ರತ್ನ ಮಂಡನದಂತೆ ಇದ್ದಿತೆಂದು ಕವಿ ಹೆಮ್ಮೆಯಿಂದ ಹೊಗಳಿಕೊಂಡಿದ್ದಾನೆ. | |
| ಈತನ ಒಂದು ಕೃತಿಯಲ್ಲಿ ಸೇವುಣ ರಾಜನಾದ ಭಿಲ್ಲಮನನ್ನು ಹೊಗಳಿದ ಪದ್ಯಗಳಿರುವುದರಿಂದ ಇವನು ಸುಮಾರು ೧೧೯೦ರಲ್ಲಿ ಇದ್ದಿರಬೇಕೆಂದು ಚರಿತ್ರಕಾರರು ತರ್ಕಿಸಿದ್ದಾರೆ. | |
| ವಿದ್ಯಾಭ್ಯಾಸ : | |
| ವೃತ್ತಿ: | |
| ಸಾಹಿತ್ಯಕೃತಿಗಳು : | |
| ಕನ್ನಡದ ಮೊದಲ ಗಣಿತ ಶಾಸ್ತ್ರ ರಚಸಿದವನು ರಾಜಾದಿತ್ಯ. | |
| `ಕ್ಷೇತ್ರಗಣಿತ', `ವ್ಯವಹಾರಗಣಿತ', `ಲೀಲಾವತಿ', `ಜೈನಗಣಿತ ಸೂತ್ರ' ಮೊದಲಾದ ಆರು ಗಣಿತ ಗ್ರಂಥಗಳನ್ನು ಇವನು ರಚಿಸಿರುವನೆಂದು ತಿಳಿಯಬಂದಿದೆ. | |
| ಈತನ ಕೃತಿಗಳಲ್ಲಿ `ಚಿತ್ರಹಸುಗೆ' ಎಂಬುದು ಟೀಕೆಯ ರೂಪದಲ್ಲಿದೆ. ಉಳಿದುವೆಲ್ಲ ಗದ್ಯಪದ್ಯಾತ್ಮಕವಾಗಿದೆ. ಆ ಕಾಲದ ವಿದ್ವಾಂಸರು ಸಾಹಿತ್ಯಾಭ್ಯಾಸಕ್ಕೆ ಉಪಯುಕ್ತವಾದ ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರಗಳನ್ನೇ ಅಲ್ಲದೇ ಕ್ಲಿಷ್ಟವಾದ ಗಣಿತಶಾಸ್ತ್ರವನ್ನೂ ಪದ್ಯದಲ್ಲಿ ಹೇಳಬಲ್ಲವಾರಾಗಿದ್ದರೆಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಇದರಿಂದ ಅಂದಿನ ಜನಕ್ಕೆ ಪದ್ಯವೇ ಹೆಚ್ಚು ಹೃದ್ಯವಾಗಿದ್ದಿತೆಂದು ತಿಳಿಯುತ್ತದೆ. |
|
| ಪ್ರಶಸ್ತಿ, ಪುರಸ್ಕಾರ, ಬಿರುದು: | |
| ಈತನಿಗೆ ಗಣಿತ ವಿಳಾಸ, ಓಜೆವೆಂಡಗ, ಪದ್ಯವಿದ್ಯಾಧರ, ಗಣಿತವಿರಿಂಚಿ ಎಂಬ ಬಿರುದುಗಳು ಇದ್ದವು. | |
| ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | |
| ಕವಿ ಸಂದೇಶ : |