| ಮಾಸ್ತಿ | ||
![]() |
||
| ಸ್ವ-ವಿವರ | ||
| ಕಾವ್ಯನಾಮ : | ಶ್ರೀನಿವಾಸ. | |
| ನಿಜನಾಮ/ಪೂರ್ಣನಾಮ : | ಮಾಸ್ತಿ ವೆಂಕಟೇಶ ಅಯ್ಯಂಗಾರ್. | |
| ಜನನ : | ೧೮೯೧ ಜೂನ್ ೬ | |
| ಮರಣ : | ೧೯೮೬ ಜೂನ್ ೬. | |
| ತಂದೆ : | ||
| ತಾಯಿ: | ||
| ಜನ್ಮ ಸ್ಥಳ : | ಮಾಸ್ತಿ,ಕೋಲಾರ ಜಿಲ್ಲೆ. | |
| ಪತ್ನಿ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ಶಿವಾರಪಟ್ಟಣ,ಮಳವಳ್ಳಿ,ಕೆಆರ್ ಪೇಟೆ. | |
| ಪ್ರೌಢಶಾಲೆ : | ಮೈಸೂರಿನ ವೆಸ್ಲಿಯರ್ ಹೈಸ್ಕೂಲ್. | |
| ಕಾಲೇಜು: | ೧೯೧೨ರಲ್ಲಿ ಸೆಂಟ್ರಲ್ ಕಾಲೇಜಿನಿಂದಬಿ.ಎ | |
| ಪದವಿ: | ಎಂ.ಸಿ.ಎಸ್. ಪರೀಕ್ಷೇಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ. | |
| ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಓದಿ ಎಂ.ಎ.ಪದವಿ | ||
| ವೃತ್ತಿ: | ||
| ೧೯೪೧ರಲ್ಲಿ ಮೈಸೂರು ಸರ್ಕಾರದಲ್ಲಿ ಕೆಲಸಕ್ಕೆ ಸೇರಿ ವಿವಿಧ ಇಲಾಖೆಯಲ್ಲಿ ಹಲವು ಉನ್ನತಹುದ್ದೆಗಳನ್ನು ಅಲಂಕರಿಸಿದರು. | ||
| ೧೯೪೪ರಲ್ಲಿ exercise commissioner ರಾಗಿದ್ದಾಗ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿ ನಿವೃತ್ತರಾದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ಮೊಸರಿನ ಮಂಗಮ್ಮ,ವೆಂಕಟಿಗನಹೆಂಡತಿ,ರಂಗಪ್ಪನದೀಪಾವಳಿ, ಸುಬ್ಬಣ್ಣ,ವೆಂಕಟಸಾಮಿಯ ಪ್ರಣಯ ಮೊದಲಾದ ೭೦ಕ್ಕೂ ಅಧಿಕಕಥೆಗಳನ್ನು ಬರೆದಿದ್ದಾರೆ. | |
| ಕಥನಕವನಗಳು: | ರಾಮನವಮಿ,ಗೌಡರಮಲ್ಲಿ,ನವರಾತ್ರಿ. | |
| ಕಾವ್ಯ: | ಶ್ರೀರಾಮಪಟ್ಟಾಭಿಷೇಕ | |
| ಕವನ ಸಂಕಲನಗಳು : | ಬಿನ್ನಹ,ಅರುಣ,ತಾವರೆ,ಮಲಾರ,ಮನವಿ,ಚೆಲವು. | |
| ಕಾದಂಬರಿ : | ಚನ್ನಬಸವನಾಯಕ,ಚಿಕ್ಕವೀರರಾಜೇಂದ್ರ(ಐತಿಹಾಸಿಕ ಕಾದಂಬರಿಗಳು),ಶೇಷಮ್ಮ,ಮಾತುಗಾರ ರಾಮಣ್ಣ(ಸಾಮಾಜಿಕ) | |
| ಅನುವಾದಿತ ಕೃತಿಗಳು : | ಷೇಕ್ಸ್ ಪೀಯರನ ನಾಟಕಗಳಾದ ಕಿಂಗ್ ಲಿಯರ್,ದಿ,ಟೆಂಪೆಸ್ಟ್,ಟ್ವೆಲ್ ಫತ್ ನೈಟ್,ಹ್ಯಾಮ್ಲೆಟ್ ಗಳನ್ನು ಕನ್ನಡಕ್ಕೆ ತಂದ ಕೀರ್ತಿ ಮಾಸ್ತಿಯವರಿಗೆ ಸಲ್ಲುತ್ತದೆ.ಇತರ ಕೃತಿಗಳು-ಚಿತ್ರಾಂಗದಾ(ಠಾಕೂರರ ಕೃತಿ), ಬಿಜ್ಜಳರಾಯ ಚರಿತ್ರೆ(ಧರಣಿ ಪಂಡಿತನ ಕೃತಿ)ಬಸವಣ್ಣನ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಾರೆ. | |
| ವಿಮರ್ಶಾ ಗ್ರಂಥಗಳು : | ಭಾರತತೀರ್ಥ,ಆದಿಕವಿವಾಲ್ಮೀಕಿ | |
| ನಾಟಕಗಳು : | ಶಾಂತಾ, ತಿರುಪಾವಿ, ಕನಕಣ್ಣ, ಶಿವಛತ್ರಪತಿ, ಯಶೋಧರ, ಮಾಸತಿ, ಅನಾರ್ಕಳಿ, ಪುರಂದರದಾಸ, ಕಾಕನಕೋಟೆ. | |
| ಪ್ರಬಂಧ : | ||
| ಸಂಪಾದಿತಕೃತಿಗಳು : | ಕರ್ಣಾಟಕ ಭಾರತ ಕಥಾಮಂಜರಿ,ಸರ್.ಎಂ.ವಿಶ್ವೇಶ್ವರಯ್ಯ. ನಮ್ಮ ನುಡಿ -ಕನ್ನಡ ಭಾಷಾಶಾಸ್ತ್ರ ಕುರಿತ ಅವರ ಕೃತಿ |
|
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೨೯ರಲ್ಲಿ ನಡೆದ ೧೫ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ | ||
| ೧೯೪೨ರಲ್ಲಿ ಹೈದರಾಬಾದಿನಲ್ಲಿ ನಡೆದ ಅಖಿಲಭಾರತ ಪ್ರಾಚ್ಯ ಸಮ್ಮೇಳನದ ೧೧ನೇಯ ಅಧಿವೇಶನದ ಕನ್ನಡ ವಿಭಾಗದ ಅಧ್ಯಕ್ಷತೆ. | ||
| ೧೯೪೬ರಲ್ಲಿ ಮದರಾಸಿನಲ್ಲಿ ನಡೆದ ಅಖಿಲ ಭಾರತ ಬರಹಗಾರರಸಮ್ಮೇಳನದ ಅಧ್ಯಕ್ಷತೆ. | ||
| ೧೯೬೪ರಲ್ಲಿ P.E.O(Poets,essasies,opinion) ಸಂಸ್ಥೆಯ ಉಪಾಧ್ಯಕ್ಷರಾಗಿ ನಂತರ ೧೯೭೬ರಲ್ಲಿ ಅಧ್ಯಕ್ಷರೂ ಆದರು. | ||
| ಮಾಸ್ತಿಯವರು 'ಜೀವನ' ಎಂಬ ಮಾಸಪರಿಕೆಯನ್ನು ಸುಮಾರು ಎರಡು ದಶಕಗಳ ಕಾಲ ನಡೆಸಿದರು. | ||
| ೧೯೭೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. | ||
| ೧೯೬೮ರಲ್ಲಿ ಮಾಸ್ತಿಯವರಸಣ್ಣಕಥೆಗಳು ಪುಸ್ತಕಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ. | ||
| ಕರ್ನಾಟಕ ಹಾಗೂ ಮೈಸೂರು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್ ಪ್ರಶಸ್ತಿ ಪಡೆದಿದ್ದಾರೆ. | ೧೯೮೩ರಲ್ಲಿ ಚಿಕ್ಕವೀರ ರಾಜೇಂದ್ರಕೃತಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದರು. | |
| ಮಾಸ್ತಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಶ್ರೀನಿವಾಸ ಸಾಹಿತ್ಯ, ಮಾಸ್ತಿವೆಂಕಟೇಶ ಅಯ್ಯಂಗಾರ ಎಂಬ ಆಂಗ್ಲ ಕೃತಿಗಳನ್ನು ಮಾನಸಗಂಗೋತ್ರಿ ಅಧ್ಯಯನ ಸಂಸ್ಥೆ ಹಾಗೂ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರಗಳು ಪ್ರಕಟಿಸಿವೆ. | ||
| ಮಾಸ್ತಿ ಅವರ ಸಣ್ಣ ಕಥೆಗಳನ್ನು ಆಕಾಶವಾಣಿ, ದೂರದರ್ಶನಗಳು ಭಿತ್ತರಿಸಿವೆ. | ||
| ೧೯೭೨ರಲ್ಲಿ ಶ್ರೀನಿವಾಸ ಎಂಬ ಸಂಭಾವನಾ ಗ್ರಂಥವನ್ನು ಅರ್ಪಿಸಲಾಯಿತು. | ||
| ಕವಿ ಸಂದೇಶ : | ||